Wednesday, June 16, 2010

ಗೀಜಗನ ಗೂಡು



ಆ ದಿನ, ಮಧ್ಯಾಹ್ನ
ಮಳೆಗಾಲದ ಸಮಯ
ದಿಕ್ಕುಗಾಣದೆ ಪರಿತಪಿಸಿತ್ತಾ
ಹಾರಾಡುತ್ತಿತ್ತು, ರೆಕ್ಕೆ ಬಲಿತ
ಗೀಜಗನ ಹಕ್ಕಿ

ಸತತ ಪರಿಶ್ರಮದ ಫಲ
ಕೆಳಗೆ ನೆಲೆನಿ೦ತ ಜಲ
ದುರ್ಗಮದ ಹಾದಿ - ತನಗೊಬ್ಬನಿಗೆ ಅಲ್ಲ
ಹೇಗೆ ಹೋಗುವುದೋ... ಯಾವ ಶತ್ರು ಬಲ್ಲ?

ಉಳಿವಿಗಾಗಿ ಹೋರಾಟ
ದೈವದತ್ತ ಪ್ರಕೃತಿ ನಿಯಮ
ಮುಗಿಯಲಾರದು ನನ್ನ ಹಾರಾಟ
ಪರೀಕ್ಷಿಸಲ್ಪಡುತ್ತಿದೆಯೇ ನನ್ನ ಸ೦ಯಮ ?

ಎಲ್ಲಿ ಹೋಗಲಿ ನಾನು ?
ಮಳೆಗಾಲಕ್ಕೆ ಮಳೆಯಿಲ್ಲ
ಆಶ್ರಯಕ್ಕೆ ಆಸರೆಯಿಲ್ಲ
ನಲಿಯಲು ಜೊತೆಗಾರನಿಲ್ಲ
ಭವಿಷ್ಯದ ಕನಸುಗಳಿಲ್ಲ
ಇಲ್ಲ ಇಲ್ಲಗಳ ಮಧ್ಯೆ ಒ೦ದು ಹೌದು,

ನೋ...ವು...ಗ...ಳು...

No comments:

Post a Comment