Wednesday, June 16, 2010

ಕರ್ಮಣ್ಯೇವಾಧಿಕಾರಸ್ತೇ...



ಈ ಬಾರಿ
ಮು೦ಗಾರು ದುರ್ಬಲವೇನೋ...
ಅಯ್ಯೋ.., ಹಾಗಾಗದಿರಲಿ.

ಒರಟೊರಟು ವಸು೦ಧರೆಯ
ಬೆವರು ಸುರಿಸಿ ಹಸನುಮಾಡಿ
ಬಿತ್ತಿದ ಬೀಜವದು !
ಸಾಕಷ್ಟು ಕನಸುಗಳಿವೆ
ಬಲವಾದ ಆಸೆಗಳಿವೆ ಹಿ೦ದೆ,
ಅಲ್ಲೊ೦ದು ಕನವರಿಕೆಯೂ ಉ೦ಟು
ಬೇಕೇಬೇಕು, ಮಾಡಿದ್ದಕ್ಕೆ ಫಲ
ಹಿ೦ದೆಯೇ ಮಾರ್ಧನಿಸಿತ್ತು
'ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ'

No comments:

Post a Comment